ಶುಕ್ರವಾರ, ಜೂನ್ 7, 2013

ಹೊರಗೆ ಶೋಧಿಸಿ
ಳಗೆ ಶುದ್ಧವಿರಿಸಿ
ಉಭಯಶಂಕೆಗಳ ಕಳೆದು
ಸ್ಫಟಿಕ ಶಲಾಕೆ ಇರಿತ ತೊರೆದು
ಭಾವ ಭವಗಳ ಮೀರಿ
ಧರ್ಮ ಕರ್ಮಗಳ ಮಾರಿ

ಮನ ಬಂದುದ ಬಯಸಿ ಬಯಸಿ
ಜೀವ ಬಯಲು

ಹಸಿದು ತಿಂದೆ
ತಿಂದಷ್ಟು ಹಸಿವು
ಪೂಜಿಸಿದಷ್ಟು ಭಕ್ತಿ
ಕೋರಿದಷ್ಟು ವರ
ಮುತ್ತಿಟ್ಟಷ್ಟು ಮುದ್ದೋ
ಮುದ್ದಿಂದ ಮುತ್ತೋ

-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ