ಶುಕ್ರವಾರ, ಜೂನ್ 7, 2013

ಉಳಿದ್ದಿದು ನಾನು

ನಗು ಮುಖವಾಡದೊಂದಿಗೆ
ನನ್ನನೂ ಸುತ್ತವರಿದ ಸಮಾಜ
ನನಗಿನೂ ಪೂರ್ತಿ ಗೊತ್ತಿಲ್ಲ
ಪ್ರತಿ ದಿನವೂ ಹೊಸ ಪ್ರತಿ ದಿನ
ಮನ ಮನಗಳು ಜಾತ್ರೆ ಗಲಭೆ ಗೊಂದಲಗಳು

ಕೀಲುಗೊಂಬೆ ಆಡಿಸೋನು ಯಾರು
ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ
ಮಾಸಲು ಪಂಚೆ, ಹಸಿರು ಕಾಂತ್ರಿ
ಬಯಲು ಸೀಮೆ ಧೋ ಮಳೆ
ಉಗಿದು ಬಾಯಿನೊಂದು ಸುಮ್ಮನಾದ ನಭ
ಧರಣಿ ಒಡಲೊಳಗಿಂದಡು ಬೇಸಿಗೆಯ ಕಾವು
ಮಳೆನಿಂತ ಮೇಲೆ; ಜನಮನದಲ್ಲೂ
ದ್ವೇಷದ ಕೆಟ್ಟ ಗಂಡಸಿನ ಕಾಮಕಣ್ಣಿನ
ರಪ್ಪೆಮುಚ್ಚಿದ ಬೂದಿಕೆಂಡ
ಮನೆ ಸೂರಿನ ಮೇಲೆ
ಸಣ್ಣದೊಂದು ಹೊಗೆ.
 
ಫ್ಯಾಕ್ಟರಿ ಗುಡುಗುಡು ಆರ್ಭಟ
ಕಲಿಯದೆ, ಅರಿಯದೆ, ತಿಳಿಯದೆ
14ಕ್ಕೆ ಹೊಗೆ ಕುಡಿಯಲುಹೊಂಟು ನಿಂತ ಹೈಕಳು
ತಿಪ್ಪೆ ಮೇಲೆ ಕುರಿ, ಕೋಳಿಯ ಕರುಳು
ಎಲ್ಲವೂ ಭುಗಿಲೆದ್ದು, ಬಿಗಿದುಕೊಂಡಾಗ
ಊರಾಚೆ ರಾಮದೇವ ದೇವಾಲಯ
ನಮ್ಮಡಿಗೆ ಬೆಂಕಿಯಿಟ್ಟ ಹೊಟ್ಟೆ ಸುಟ್ಟಾವೂ
ಸುತ್ತ ದೇವರಕಾಡಿನ ಮರಗಿಡಗಳ ಕೇಕೆ
ಸೇಡು ತೀರಿಸಿಕೊಂಡ ಗರ್ಭ ಗುಡಿಯ ಸೂಪ್ತಿ
ಭವಿಷ್ಯ ತಿಳಿದು ಗೆದ್ದಲು ಹಿಡಿದು ಹೋದನಂತೆ
ಉತ್ಸವ ಗರುಡ ತೇರು..
ಉಳಿದ್ದಿದು ನಾನು; ಮುಂದಿನ ಗರುಡಗಂಬದಲ್ಲಿ
ನನ್ನಂತೇ ಏನು ಅರ್ಥವಾಗದೆ ನಗುವ ಹನುಮಂತ

-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ