ಬದಲಾದಂತೆ ಭಾವ 1. ಅವನ ಭಾವ ಚುಂಬಕ ಮೊಗ್ಗು ನಾಚಿಕೆ ಕರೆಸಿ ಹೂವಿನ ನಗು ಆಕಳಿಸಿ ಅರಳಿನಿಂತಂತೆ ಮಾತಿನ ಬಿಸಿಲರಶ್ಮಿಗೆ ನಗು ಬರಿಸಿ.. ಉನ್ಮಾದ ಕರೆಸಿ.. ಕಿವಿ ರೋಮ ಪುಳಕಗೊಂಡಂತೆ ನಡುನತ್ತಿಯ ಸೂರ್ಯಕ್ಕೆ ಚುರುಕು ಬೆಳಕಲಿ ಎಲ್ಲಾ ತಿಳಿದಂತೆ ಅರಳುವಿಕೆಯ ಅರ್ಥ ಬಿರಿಯುವುದರಲ್ಲಿ ಏನಿನ್ನಲ್ಲ ವಿಶೇಷತೆ ಸಮಷ್ಠಿಯೂ ಸಿಕ್ಕ ಗೆಲುವಿನ ಮದ ಅರಳಿ ನಾಚಿದ ಪ್ರತಿ ಪಳಿಕೆ ಆಳ ಅರಿತ ಅವನದೇ ರಶ್ಮಿಗೆ ಅರಳಿದ ಹೂ ಅದು ಅವನಿಗೇನು ಹೊಸತನ ನೀಡಲಿಲ್ಲ ಮತ್ತೆ ಮತ್ತೆ ಪಶ್ಚಿಮಕ್ಕಿತ್ತು ಅವನ ಮುಖ ಸಂಜೆಗೆ ಕರಗುವ ಮುನ್ನವೂ ಕಣ್ಣಾಯಿಸಲಿಲ್ಲ ಕಡಲ ಕಿನ್ನಾರೆಗಳಿಗೆ ಗುಸುಕಿದನಂತೆ ಅರುಣೋದಯಕ್ಕೆ ಅರಳಿದವಳಲ್ಲಿ ಸಂಧ್ಯಕ್ಕೆ ಹೊಸತೇನಿಲ್ಲ 2. ಅವಳ ಭಾವ ಪ್ರೀತಿ ಹಣ್ಣು ತಿಂದು ಉಗಿದರು ಒಡೆದು, ಚಿಗುರಿ, ಮೌನವಾಗುವಿಕೆಯಲ್ಲಿ.. ಹೃದಯದಲ್ಲಿ ಬಿತ್ತಿದ ಬೀಜದಂತೆ ಪ್ರತಿ ಕಣದಲ್ಲೂ ವಿಶಿಷ್ಠತೆ ಸಾರುವ ಅರಳಿಯಂತೆ ತನ್ನ ಒಡಲಲ್ಲಿ ಮತ್ತೊಂದು ಸಾಕುವ ಬಸುರಿಮರದಂತೆ ಅಂತರಾಳಕ್ಕೆ ಭಾವಗಳ ಬೇರಿಳಿಸಿ ಬೆಳೆವ ಆಲದಂತೆ ಮಣ್ಣ ಅಪ್ಪಿ ತಾನು ಬೆಳೆದು.. ತನ್ನತನವ ಗಟ್ಟಿಗೊಳಿಸುವ ಹೆಣ್ಣು ಜೀವಂತೆ ಪ್ರತಿ ದಿನ ಹೊಸತು.. -ಹರವು ಸ್ಫೂರ್ತಿಗೌಡ
ಮಾರಮ್ಮನ್ ಗುಡಿ ಕಬ್ಬು ತೊಂಡೆ ಒತ್ತಕಂಡ್ ಹೈವಾಗಾ ಹಸರು ಗರಿ ಮಧ್ಯದಿಂದ ಇಣಕಿ ನೋಡ್ದೇ ಮೂರ್ ಕಳ್ದು ಆರು ಉಗಾದಿ ಬಂದೋ ಇನ್ನೋದ್ ಗಿತ ಬಾರೋ ತೊಂಡೆ ಒತ್ತಕಂಡು ನಮ್ಮ ಬೀದಿ ಕಡೆಗೆ ಅಸಿಗೆ ಮೈತೊಳಿವಾಗ ಮೈ ಉಜ್ಜುತ್ತಿದ್ ಉಲ್ ಗೆ ನೀರ್ ಅದಿ ಮಕ್ಗೀಗ್ ನೀರ್ ಎರ್ಚ್ ದೋನೆ ನೀರ್ ಒಳಗೆ ಕಾಣದಂಗಾದ ಸೌಟು ತಕೊಟ್ಟೋನೆ ಎರಡ್ ಮಳ್ಗಾಲ ಕಳ್ದು ನಾಲ್ಕ್ ಸತಿ ಹಳೆ ಕಾವಲಿಗೆ ನೀರ್ ಬುಟ್ಟರು ಬೆಳಗುದ್ದ ತಪಲಿ ಬೆಳಿಕಡು ಕೊಂತಿವ್ನಿ ಅಸ ಹೋಡ್ಕಂಡು ಇನ್ನೋಂದ್ ಗಿತ ಬಾರೋ ಕೆರೆ ಕಡೆಗೆ ಕಿವುಡ್ ನಾರಾಯಣ ಬಂದ ಪ್ಯಾಟಿ ಗಂಡ್ ತಂದ ಒಂದೇ ದೀಪಾವಳಿಗೆ ಕೊಟ್ಟಿ, ಕರ್ದೀ-ಕಳ್ಸುದ್ರು ಆಸಾಢಕ್ಕೆ ಅವ್ವನ್ ಮ್ನಗೆ ಕಳ್ಸವರೇ.. ತೌವರ್ರೂರ್ ಹಬ್ಬದಾಗೆ ತಂಬಿಟ್ಟ ಆರತಿ ತರುವಾಗ ಕಂಡೆ ಮಾರವ್ವನ್ಗೆ ಹಚ್ಚುದ್ ದೀಪದಾಗೆ ನನ್ನ ಕಣ್ಣೇರ್ ಕಂಡೆ ತಮ್ಮಟೆ ಸದ್ದ ಇದ್ದರು ನನ್ನ ಗುಂಡಿಗೆ ಸದ್ದ್ ಗೊತ್ತ್ ಮಾಡ್ಕಂಡೆ "ಒಂಟೋಗಣ" ಬಮ್ಮಿ ತಡರಾತ್ರಿ ಬಾಯಿಬೀಗ ಚುಚ್ಚುಸ್ಕಳೊ ಹೊತ್ತಗೆ ಗಾಡಿ ಕಟ್ಟಿ, ಒಣಹುಲ್ಲ್ ಹಾಸಕಂಡಿ ಕಾಯ್ತಾ ಕೊಂತಿರ್ತೀನಿ ಊರ್ ಮುಂದ್ಲು ಮಾರಮ್ಮನ್ ಗುಡಿ ಮುಂದೆ -ಹರವು ಸ್ಫೂರ್ತಿಗೌಡ
ಮಂಗಳವಾರ, ಏಪ್ರಿಲ್ 2, 2013
ನಿರಾರ್ಥಕ
ಕಳೆದುಕೊಂಡ ನೆನಪುಗಳೆಷ್ಟೊ ಮರಳಿ ಪಡೆವ ಬಯಕೆಗಳೆಷ್ಟೊ ಕಾಣದ ಕೈಯ ಮೋಸವೆಷ್ಟೊ ಮಡಿಲಲ್ಲಿ ಮಲಗಿದ ಕನಸುಗಳೆಷ್ಟೊ ಕಣ್ಣೀರು ಹರಿಸದ ದುಮ್ಮಾನವೆಷ್ಟೊ ಅರಿಯದೆ.. ಎಲ್ಲಾ ಕಳೆದು... ಏನೂ ಪಡೆಯದ.. ನಿರಾರ್ಥಕವಿಷ್ಟೆ?
- ಹರವು ಸ್ಫೂರ್ತಿಗೌಡ
ಕತ್ತರಿಸದಿರಿ ರೆಪ್ಪೆಗಳ
ಬಿತ್ತುವ ಬೆಳೆಗೆ ಬೆಲೆಯೇ ಇಲ್ಲ ಉಳುವ ನೇಗಿಲಿಗೆ ಬೆವರ ಲೆಕ್ಕವಿಲ್ಲ ಭತ್ತಕೊಯ್ಯವ ಕೈಗೆ ಅನ್ನವಿಲ್ಲ ನೊರೆಹಾಲು ಕರೆದ ನನ್ನವ ತಣ್ಣಗಿಲ್ಲ ಜಾಗತೀಕರಣಗಳೇ ಕಾಡದಿರಿ ನನ್ನೂರ ಮಣ್ಣಿನ ರಸ್ತೆಯ ಕೇಳದಿರಿ ಜೋಪಡಿ ಮನೆಗೆ ಕದವೇ ಇಲ್ಲ ಮಲಗಿದರೆ ನೆಮ್ಮದಿ ನಿದ್ದೆಗೆ ಬರವಿಲ್ಲ ಎಂದೋ ತಿಂದ ಅನ್ನದ ರುಚಿ ಉಳಿದಿಲ್ಲ ರಣ ಹಸಿವೇ ನಮ್ಮಕಾಡದಿರಿ ದುಡಿವದೇಹದ ಶಕ್ತಿಯ ಕೇಳದಿರಿ
ನನ್ನ ಜನ ಕಂಡ ಕನಸುಗಳೆಲ್ಲ ನನಸಾಗದ ಕನಸುಗಳಿಗೆ ಭವಿಷ್ಯವಿಲ್ಲ ಅಭಿವೃದ್ಧಿ ಗ್ರಹಣಗಳೇ ಬಾರದಿರಿ ಮರಳಿ ಗುಡಿಸಿಲು ನಿದ್ದೆಯ ಕೇಳದಿರಿ ಉತ್ತುವ ಭೂಮಿಯ ಹೊತ್ತೊಯ್ಯದಿರಿ