ಕತ್ತರಿಸದಿರಿ ರೆಪ್ಪೆಗಳ
ಬಿತ್ತುವ ಬೆಳೆಗೆ ಬೆಲೆಯೇ ಇಲ್ಲಉಳುವ ನೇಗಿಲಿಗೆ ಬೆವರ ಲೆಕ್ಕವಿಲ್ಲ
ಭತ್ತಕೊಯ್ಯವ ಕೈಗೆ ಅನ್ನವಿಲ್ಲ
ನೊರೆಹಾಲು ಕರೆದ ನನ್ನವ ತಣ್ಣಗಿಲ್ಲ
ಜಾಗತೀಕರಣಗಳೇ ಕಾಡದಿರಿ
ನನ್ನೂರ ಮಣ್ಣಿನ ರಸ್ತೆಯ ಕೇಳದಿರಿ
ಜೋಪಡಿ ಮನೆಗೆ ಕದವೇ ಇಲ್ಲ
ಮಲಗಿದರೆ ನೆಮ್ಮದಿ ನಿದ್ದೆಗೆ ಬರವಿಲ್ಲ
ಎಂದೋ ತಿಂದ ಅನ್ನದ ರುಚಿ ಉಳಿದಿಲ್ಲ
ರಣ ಹಸಿವೇ ನಮ್ಮ ಕಾಡದಿರಿ
ದುಡಿವದೇಹದ ಶಕ್ತಿಯ ಕೇಳದಿರಿ
ನನ್ನ ಜನ ಕಂಡ ಕನಸುಗಳೆಲ್ಲ
ನನಸಾಗದ ಕನಸುಗಳಿಗೆ ಭವಿಷ್ಯವಿಲ್ಲ
ಅಭಿವೃದ್ಧಿ ಗ್ರಹಣಗಳೇ ಬಾರದಿರಿ
ಮರಳಿ ಗುಡಿಸಿಲು ನಿದ್ದೆಯ ಕೇಳದಿರಿ
ಉತ್ತುವ ಭೂಮಿಯ ಹೊತ್ತೊಯ್ಯದಿರಿ
-ಹರವು ಸ್ಫೂರ್ತಿಗೌಡ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ