ಶುಕ್ರವಾರ, ಜೂನ್ 7, 2013

ಗುಡಿ ಗೋಪುರಗಳ ಅರಿವಿಲ್ಲ
ಭಯದ ಭಕ್ತಿ ಬೇಡುವೆಯೇನು
ಕಲ್ಲ ಮೇಲೆ ಪ್ರೀತಿ ಬಾರದು
ಅಂತರಂಗ ಧ್ಯಾನಕ್ಕೆ ಒಲಿಯದ ದೇವರು ನೀನು
ಪೂಜಿಸಿ, ಸುತ್ತಿಸುವ ಕಲೆ ಬಲ್ಲೆನೇನು
ಸಾಕ್ಷಾತ್ಕರಿಸಿ ಒಲಿಸಿಕೊ
ನನ್ನದೂ ಕಲ್ಲು ಹೃದಯವೇ


-ಹರವು ಸ್ಫೂರ್ತಿಗೌಡ
23-05-2013 (8.10am)
ವ್ಯಾಮೋಹಿ

ಕಾಣದ ದೂರ ತೀರ ಕರೆಯುವುದು
ಸುತ್ತು ಸುಳಿಯ ನಡುವೆ ಬಿಗಿದಪ್ಪಲು
ಎದೆ ಆರ್ಭಟದ ಆಸೆ ಮುದ್ದಿಗೇನೋ
ಕಣ್ಣ ಬಯಕೆ ತೃಪ್ತಿ ಇಲ್ಲದ ಮುತ್ತು ಕೊಡಲು
ಒಳಗೊಳಗೆ ಕೊರೆಯುವ ತೀವ್ರ ಝರಿಯೇ
..

ಭೂಮಿ ಗರ್ಭ ಮೌನಗಳಿಗೆ ಕೈಯಿಟ್ಟು ಜುಂ ಎನಿಸಿ
ಕಣ್ಮುಚ್ಚಿ ಮೈತುಂಬಿ ಬೆನ್ನಿಗಬ್ಬಿ
ಎದೆ ಭಾರವ ಎದೆಗೆ ಇಳಿಸಿ
ಹತ್ತಿರವಾದಷ್ಟು ಸೆಳೆತ ನೀಡಿ
ಅರಿವಿಗೆ ಅರಿಯದೇ ಪ್ರೀತಿ ಹೀರಿ
ಮೊಗ್ಗಿನಿಂದ ಹೂವು ಅರಳುವಂತೆ
ತೆರೆದ ತೆರೆಗಳ ತೆರವು ಮನವೇ

ಕಾಡಿದಷ್ಟು ಮೋಹಗೊಳಿಸಿ
ಬೇಡಿದಷ್ಟು ಹಣ್ಣಾಗಿಸಿ
ಹರಿವ ಜೀವರಸಗಳ ಗುಪ್ತಗಾಮಿನಿ
ಪ್ರೇಮವೋ ಪ್ರೀತಿಯೋ ಬಂದು ಹೋಗಲಿ
ಪುಸ್ತಕದಲ್ಲಿ ಬರೆದಂಗೆ ಬದುಕಲಾರೆ

ಸುಳಿಯಲ್ಲಿ ಸಿಲುಕಿದ ನಾನು
ತಳದಲ್ಲಿ ಮೀನು ಅದರ ಅಸ್ತಿ


-ಹರವು ಸ್ಫೂರ್ತಿಗೌಡ
28-05-2013 (2.38 pm)
ಕೆಂಪು ಗೀತೆ

ಯಾವ ಗುರುತೋ, ಯಾರ ಮತವೂ
ಗೆದ್ದ ಮೇಲೆ ನಾವು ಯಾರು
?

ಮತವ ಪಡೆದು ಬದುಕ ಕಳೆದು
ಪ್ರಶ್ನೆಸಿ ನಿಲ್ಲುವರು ನೀವು ಯಾರು?

ಕಾಡ ಕಣಿವೆಯಲಿ ಗುಡಿಸಲ ಕಟ್ಟಿ
ಉತ್ತಿ-ಬಿತ್ತಿ ಬದುಕ ಕಂಡ ಜೀವ ನಾವು

ಹುಲಿಯೇ ಇಲ್ಲದ ಸಂರಕ್ಷಿತ ಅರಣ್ಯವೆಂದು
ಕಿತ್ತು ಒದರಿದಿರೀ ಪುಟ್ಟ ಗುಡಿಸಲ ನೀವು
ಕಟ್ಟಿದ ಬದುಕ ಕೆಡವಿ ಹೋದವರೆ
ಕರಾವಳಿಯ ಕಾಣದ ಕಾನನ ಕಂಡಿರೇ ನೀವು
ಕೆಂಪು ಬಣ್ಣವ ಮುಖಕ್ಕೆ ಬಳಿದು
ಬಣ್ಣವಿಲ್ಲ ಕತ್ತಲಲಿ ಕೂರಿಸಿ ಕೇಳುವಿರಿ
ಕೆಂಪು ಹುಡುಗ ನೀನು ಯಾರು

ಕೆಂಪು ಹುಡುಗ ನಾನು ಯಾರು?
ಎಂದ ಮೇಲೆ ಹಿಡಿದೆ ಕೆಂಪು ಬಾವುಟ
ಗೇರು ಬೀಜದ ಸೊನೆಯ ಕೋಪ

ಗುಳೆಗುಳೆ ಹೊಟ ನನ್ನವರ ಬದುಕು ಇನ್ನೆಲ್ಲಿ
ತಿನ್ನುವ ಅನ್ನ ಮಣ್ಣಿಗೆ ಸುರಿದಿರಿ
ಸಿಡಿದು ಹಿಡಿಯ ಬಾರದೆ ಬಂದೂಕು?
ಕನಸ ಬೆರಸಿ ನೆಟ್ಟ ಅಡಿಕೆಗೆ
ಬೆಂಕಿಯಿಟ್ಟು ಕೇಕೆ ಹಾಕುವ ಪಡೆಯೇ
ಹಾಡಬಾರದೇ ಕ್ರಾಂತಿ ಗೀತೆಯ ನಾನು
ನಾನು ಮಲೆ ಕುಡಿಯ.. ನಾನು ಮಲೆಕುಡಿಯ..
ಹುಲಿಯು ನನ್ನದೇ ಮಲೆಯು ನನ್ನದೆ
ಸಂರಕ್ಷಿತ ಅರಣ್ಯವೂ ನನ್ನದೇ
ಬಿಟ್ಟು ತೊಲಗಿರಿ ನೀವು..


-ಹರವು ಸ್ಫೂರ್ತಿಗೌಡ
13-05-2013(5.57pm)
ಎಲ್ಲೋದಳು?

ಕಬ್ಬು ಬೆಳೆದ ನೀರು ಗದ್ದೆಯಲ್ಲಿ
ಮೊಳೆಯಲಿಲ್ಲ ರಾಗಿ
ತುಂಬಿ ಹಾಲು ಕಟ್ಟುತ್ತಿದ್ದ ಭತ್ತ
ಬಣಗುಟ್ಟಿ ಜಲ್ಲನೆ ಉದುರಿ
ನಾಡ ಹಸು, ಹಿಂಡು ಹಿಂಡು ಕುರಿಗಳ

ಸಂತೆ ಬಿಕರಿಗೆ ಬಿಟ್ಟು
ಬಿತ್ತನೆ, ನಾಟಿ ಯಾವ ಕೂಲಿಯು ಸಿಗದೆ
ತುಂಡು ಬೀಡಿಗೆ ಬೆಂಕಿಯಿಟ್ಟರೆ..
ಕಿಟ್ಟದ ಕಿಡಿ ಯಾವುದೋ ರೋಷಕ್ಕೆ ಬೆಂಕಿಯಿಟ್ಟು
ಯಾರ ಸುಡಲಿಕ್ಕೆ ಕಾಯುವುದೋ
ಹರಳಲ್ಲಿಲ ಬೇಲಿ ಹೂ
ಮಾಗಲಿಲ್ಲ ಮರದ ಹಣ್ಣ
ಸರಿಯಲಿಲ್ಲ ಮೊದಲ ಮಳೆ
ಬರದ ಕಣ್ಣು ಬರಿದು
ಕಾವೇರಿ ನಿನ್ನೆಲ್ಲೇ?


-ಹರವು ಸ್ಫೂರ್ತಿಗೌಡ
13-05-2013(5.30pm)
ಕರೆವ ಕೆಚ್ಚಲ ಕತ್ತರಿಸಿ
ಉಳುವ ಎ
ತ್ತಿನ ಕೊರಳ ಗಂಟೆ ಮಾರಿ

ಊರು ಊರಿಗೆ ಗುಳೆ ಹೊರಟೇವು
ಎಂದೋ ನೀರು ಕುಡಿದ ಎಮ್ಮೆ
ಬಾಯಾಡಿಸುವುದೇ ಮರೆತ ಕುರಿ-ಆಡು
ಬಸರಿ ಬಣಂತಿರು ತುಂಬಿದ ಗಾಡಿ
ಎಳಿ ಎಳಿಯಲೋ ಬಸವ
ನಲೆ ಕಾಣು ವರೆಗೆ
ಬೆನ್ನು ಹಿಡಿದ ಗಂಡಸು ಹೊಟ್ಟೆ
ಅಳಲು ಕಣ್ಣಿರು ಬತ್ತಂತೆ ಕಂಡ ಕೂಸುಗಳು
ಚೀವ್ ಗುಡದ ಕೋಳಿ ಪಿಳ್ಳೆಗಳು
ನಡೆದು ನಡೆದೇ ಕಾಣದಂತಾದೋ
ಗೋಧಾವರಿ ಮತ್ತೆ ಮರೆತೆ ಹರಿಯಲು

-ಹರವು ಸ್ಫೂರ್ತಿಗೌಡ
ಹೊರಗೆ ಶೋಧಿಸಿ
ಳಗೆ ಶುದ್ಧವಿರಿಸಿ
ಉಭಯಶಂಕೆಗಳ ಕಳೆದು
ಸ್ಫಟಿಕ ಶಲಾಕೆ ಇರಿತ ತೊರೆದು
ಭಾವ ಭವಗಳ ಮೀರಿ
ಧರ್ಮ ಕರ್ಮಗಳ ಮಾರಿ

ಮನ ಬಂದುದ ಬಯಸಿ ಬಯಸಿ
ಜೀವ ಬಯಲು

ಹಸಿದು ತಿಂದೆ
ತಿಂದಷ್ಟು ಹಸಿವು
ಪೂಜಿಸಿದಷ್ಟು ಭಕ್ತಿ
ಕೋರಿದಷ್ಟು ವರ
ಮುತ್ತಿಟ್ಟಷ್ಟು ಮುದ್ದೋ
ಮುದ್ದಿಂದ ಮುತ್ತೋ

-ಹರವು ಸ್ಫೂರ್ತಿಗೌಡ
ಉಳಿದ್ದಿದು ನಾನು

ನಗು ಮುಖವಾಡದೊಂದಿಗೆ
ನನ್ನನೂ ಸುತ್ತವರಿದ ಸಮಾಜ
ನನಗಿನೂ ಪೂರ್ತಿ ಗೊತ್ತಿಲ್ಲ
ಪ್ರತಿ ದಿನವೂ ಹೊಸ ಪ್ರತಿ ದಿನ
ಮನ ಮನಗಳು ಜಾತ್ರೆ ಗಲಭೆ ಗೊಂದಲಗಳು

ಕೀಲುಗೊಂಬೆ ಆಡಿಸೋನು ಯಾರು
ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ
ಮಾಸಲು ಪಂಚೆ, ಹಸಿರು ಕಾಂತ್ರಿ
ಬಯಲು ಸೀಮೆ ಧೋ ಮಳೆ
ಉಗಿದು ಬಾಯಿನೊಂದು ಸುಮ್ಮನಾದ ನಭ
ಧರಣಿ ಒಡಲೊಳಗಿಂದಡು ಬೇಸಿಗೆಯ ಕಾವು
ಮಳೆನಿಂತ ಮೇಲೆ; ಜನಮನದಲ್ಲೂ
ದ್ವೇಷದ ಕೆಟ್ಟ ಗಂಡಸಿನ ಕಾಮಕಣ್ಣಿನ
ರಪ್ಪೆಮುಚ್ಚಿದ ಬೂದಿಕೆಂಡ
ಮನೆ ಸೂರಿನ ಮೇಲೆ
ಸಣ್ಣದೊಂದು ಹೊಗೆ.
 
ಫ್ಯಾಕ್ಟರಿ ಗುಡುಗುಡು ಆರ್ಭಟ
ಕಲಿಯದೆ, ಅರಿಯದೆ, ತಿಳಿಯದೆ
14ಕ್ಕೆ ಹೊಗೆ ಕುಡಿಯಲುಹೊಂಟು ನಿಂತ ಹೈಕಳು
ತಿಪ್ಪೆ ಮೇಲೆ ಕುರಿ, ಕೋಳಿಯ ಕರುಳು
ಎಲ್ಲವೂ ಭುಗಿಲೆದ್ದು, ಬಿಗಿದುಕೊಂಡಾಗ
ಊರಾಚೆ ರಾಮದೇವ ದೇವಾಲಯ
ನಮ್ಮಡಿಗೆ ಬೆಂಕಿಯಿಟ್ಟ ಹೊಟ್ಟೆ ಸುಟ್ಟಾವೂ
ಸುತ್ತ ದೇವರಕಾಡಿನ ಮರಗಿಡಗಳ ಕೇಕೆ
ಸೇಡು ತೀರಿಸಿಕೊಂಡ ಗರ್ಭ ಗುಡಿಯ ಸೂಪ್ತಿ
ಭವಿಷ್ಯ ತಿಳಿದು ಗೆದ್ದಲು ಹಿಡಿದು ಹೋದನಂತೆ
ಉತ್ಸವ ಗರುಡ ತೇರು..
ಉಳಿದ್ದಿದು ನಾನು; ಮುಂದಿನ ಗರುಡಗಂಬದಲ್ಲಿ
ನನ್ನಂತೇ ಏನು ಅರ್ಥವಾಗದೆ ನಗುವ ಹನುಮಂತ

-ಹರವು ಸ್ಫೂರ್ತಿಗೌಡ
ನಿನಗರಿಯದೇ ಮಾಡುವ
ಮುದ್ದಿನ ಕೆಲಸವೆಲ್ಲ ಪಾತಕವೇ
ನಗರಿಯದೇ ಕೆನ್ನೆಗೆ ಭಾರಿಸಿದ್ದೇಲ್ಲಾ ಪ್ರೀತಿಯೇ
ಭೇಟಿ-ನಿದ್ದೆ ಎರಡೂ ಆಕಸ್ಮಿಕ
ಸೊಂಟ ಬಳಸಿದ ನೀನು
ಭುಜಕೊರಗಿದ ನಾನು
ಎರಡೂ ಅಪಘಾತ
ಒಳಗೂ-ಹೊರಗೂ
ಯಾವುದಕ್ಕೂ ಅರ್ಥವಿಲ್ಲ
ಸುಮ್ಮನಿರುವುದು ವಾಸಿ
ಬರೆದ ಮೇಲೂ
ಓದಿದ ಮೇಲೂ..

-ಹರವು ಸ್ಫೂರ್ತಿಗೌಡ
28-04-2013(9.38 pm)
ನನಗಲ್ಲದ್ದು

ಅಳಲು ಸಿದ್ಧವಾದವಳಂತೆ
ಕಾಡಿಗೆ ಇಲ್ಲದ ಕಣ್ಣು
ಕೆನ್ನೆಯಿಂದಿಳಿದು ಕಿವಿಗುರುಳಿದ..

ಕಿವಿಯೊಲೆಯಲ್ಲಿ ಹುಡುಕಿದ
ನೀಲಿ ಕಲ್ಲರಳು!
ನೀ ಕೊಡುವ ಮುತ್ತು ನನ್ನಗಲ್ಲ
ನಾಚಿಕೆ ನಡುಜಾರಿದರೆ...?


-ಹರವು ಸ್ಫೂರ್ತಿಗೌಡ
ಎಲ್ಲೋ ನಿಂತ ಕಾಲ
ಯಾರೊಡನೆಯೋ ಕಂಡ ಕನಸು
ನೆನಪುಗಳೆಲ್ಲ ಕಡಲಾಗಿದೆ
ಮರೆಯಾಗಿ ಹೋಗು
ಮುಳುಗುವ ನೇಸರನಂತೆ
ತೇರು ಹರಿದು
ಕೊರಗು ಅರಿದು
ಸ್ಪಷ್ಟವಲ್ಲದ ಸಂಬಂಧಗಳು
ನಾಜೂಕಿನ ಬಿರುಕುಗಳು
ಅಗಲಿರಲು ಹೀಗೆ ನಾವು..


-ಹರವು ಸ್ಫೂರ್ತಿಗೌಡ
21-4-2013
ಮೋಡ ಕಟ್ಟುವುದಿಲ್ಲ
ಪ್ರೀತಿ ಹನಿಹನಿ ಸುರಿದು
ಯಾವ ಬರಡು ಹೃದಯವನ್ನೂ
ಚಿಗುರೊಡೆಸುವುದಿಲ್ಲ..

ಬಾನಿಗಾಸೆ ನೆಲದೆಡೆಗೆ
ಬಾಗುವುದೇನೋ
ಮಣ್ಣಿನ ದೀಪದಲ್ಲಿ
ಬೆಳಗು-ಕತ್ತಲಿನ ಆಲಿಂಗನ

ತೀರದ ಬದುಕೇ
ಕಡಲಿನ ತುದಿಯು
ಚಂದ್ರ ಬರುವುದು ಯಾವಾಗ..?

-ಹರವು ಸ್ಫೂರ್ತಿಗೌಡ
22-04-2013
ಮುಳುಗಿದಂಗೆ ಕಳೆದುಕೊ
ನಿಂತ ಸಾಗರದಲ್ಲೇ
ಪ್ರೀತಿ ಹಡಗು ಮುಳುಗಿತ್ತು
ಕೂಗಾಟ, ನರಳಾಟವಿಲ್ಲ
ಮುಳುಗಿದಷ್ಟು ಆಳಕ್ಕೆ ಇಳಿದೆ
ನಿಟ್ಟುಸಿರು..

ನಿನ್ನ ಎದೆ ಮೇಲೆ ನನ್ನ ಎದೆ..

-ಹರವು ಸ್ಫೂರ್ತಿಗೌಡ
23-04-2013
ಕೆಸರು ಗದ್ದೆ ಹಸಿರು ಮನ
ತೆವರಿ ಬದುವಿನಲ್ಲಿ ಸ್ಫಟಿಕ ಹರಿನೀರು
ಕಪ್ಪುಜಡಿ ಮಣ್ಣಿನ ಹರೆಯ
ಹಸನು ಹಸನು..

ನಿನ್ನಕಣ್ ನೇಗಿಲು ಉತ್ತೀತು
ಮನದ ಭೂಮಿ
ಹೃದಯ ತೆರೆದು
ಫಸಲು ಕೊಯ್ಲು..

ಕಣಜ ಬಂಡಿ ಮನೆ ಸೇರಿಲ್ಲ ಇನ್ನೂ
ಮನ ಮನದಲ್ಲಿ ಉರಿವ ಕಿಚ್ಚು
ಸುತ್ತ ಕುಣಿದಾಡುವ ಸಾವು
ಗುರುತು ಸಿಗುತ್ತಿಲ್ಲ
ಜಾತಿ ಮತಗಳ ನಡುವೆ
ಮತಾಂಧರ ಕಣ್ಣು ತೆರೆಸು
ಮಣ್ಣಿನ ಋಣವಿದೆ
ಪ್ರೇಮ ಸರಸ್ವತಿ ಹರಿಯಲಿ
ನನ್ನೂರು-ನಿನ್ನೂರ ಮನದ ನಡುವೆ

ಹಾರಲಿ ಪಾರಿವಾಳ
ನನ್ನ-ನಿನ್ನ ಪ್ರೀತಿ ಗೆಲುವಿಗೆ

-ಹರವು ಸ್ಫೂರ್ತಿಗೌಡ
25-04-2013
ವಾಸ್ತವ ಇನ್ನೂ ತೆರೆದುಕೊಳ್ಳುತ್ತಲೇ ಇದೆ
ನಿನ್ನೊಲುಮೆ ಅರ್ಥವಾದಷ್ಟು
ವಸ್ತುಗಳಿಗೆ ಎರಡು ಮುಖ ಕಾಣಿಸುತ್ತಿದೆ
ನೀತಿಯಿಂದ ಹೊರತಾದದ್ದು
ಮನುಷ್ಯನ ಆಳದ ಸಾಕ್ಷಿಗಳು
ಪ್ರಶ್ನೆಗಳು ಹೇಗೆ ಏಳುತ್ತವೆ!

ನನ್ನದು ಜೀವಿಸುವ ಅಮಲು
ಸತ್ತವನೇ
ಡಿಮೆ ಅಪಾಯಕಾರಿ
ಗುಟ್ಟುಗಳನ್ನೆಲ್ಲ ಸ್ವೀಕರಿಸಿ ಸತ್ತುಹೋಗಿದ್ದ
ಹೊರಗಿನ ಪ್ರತಿ ಸಾವು ನನ್ನೊಳಗೂ...

ಮೌನ ಸ್ಥಿರಪ್ರಜ್ಞೆ ಗದ್ದಲದಿಂದ ತುಂಬಿ ಹೋಗುವ ಭಯ
ಅಸಹ್ಯ "ಜಿದ್ದು"; "ಪ್ರೀತಿಸು" ಎಲ್ಲ ತಾತ್ಕಾಲಿಕ
ಕಾಕತಾಳೀಯ ಮತ್ತು ನಿಗೂಢ
ಇಷ್ಟವೆಲ್ಲಾ ಅನುಷ್ಠಾನವಾಗುತ್ತಿತ್ತು
ಅಗಲಿಕೆ ಅರ್ಥವಾಗಲಿಲ್ಲ, ಪ್ರಯತ್ನಿಸಲೂ ಇಲ್ಲ
ಪ್ರೀತಿಯ ತಂಪೆರೆಯುತ್ತಿದ್ದ ಮಳೆಗೂ ಸಿಟ್ಟು
ಗುಡುಗಿ, ಕೆಂಡದಂತೆ ಬ್ಧ ಆರ್ಭಟ
ಮಳೆ ಹನಿಯಲಿಲ್ಲ ಭೂಮಿ ಬಿಕ್ಕಳಿಸುತ್ತಿದ್ದಳು...
ಒಂದು ದಿನ ಪೂರ್ಣ ನೀಲಿ ಆಕಾಶ
ಕಚ್ಚಿದ ಬಾನಿನ ತುಣುಕು ಕೈಯಲಿ..

-
ಹರವು ಸ್ಪೂರ್ತಿಗೌಡ

07-06-2013(11.35 pm)