ಶುಕ್ರವಾರ, ಜೂನ್ 7, 2013

ಕೆಸರು ಗದ್ದೆ ಹಸಿರು ಮನ
ತೆವರಿ ಬದುವಿನಲ್ಲಿ ಸ್ಫಟಿಕ ಹರಿನೀರು
ಕಪ್ಪುಜಡಿ ಮಣ್ಣಿನ ಹರೆಯ
ಹಸನು ಹಸನು..

ನಿನ್ನಕಣ್ ನೇಗಿಲು ಉತ್ತೀತು
ಮನದ ಭೂಮಿ
ಹೃದಯ ತೆರೆದು
ಫಸಲು ಕೊಯ್ಲು..

ಕಣಜ ಬಂಡಿ ಮನೆ ಸೇರಿಲ್ಲ ಇನ್ನೂ
ಮನ ಮನದಲ್ಲಿ ಉರಿವ ಕಿಚ್ಚು
ಸುತ್ತ ಕುಣಿದಾಡುವ ಸಾವು
ಗುರುತು ಸಿಗುತ್ತಿಲ್ಲ
ಜಾತಿ ಮತಗಳ ನಡುವೆ
ಮತಾಂಧರ ಕಣ್ಣು ತೆರೆಸು
ಮಣ್ಣಿನ ಋಣವಿದೆ
ಪ್ರೇಮ ಸರಸ್ವತಿ ಹರಿಯಲಿ
ನನ್ನೂರು-ನಿನ್ನೂರ ಮನದ ನಡುವೆ

ಹಾರಲಿ ಪಾರಿವಾಳ
ನನ್ನ-ನಿನ್ನ ಪ್ರೀತಿ ಗೆಲುವಿಗೆ

-ಹರವು ಸ್ಫೂರ್ತಿಗೌಡ
25-04-2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ