ಮಂಗಳವಾರ, ಜನವರಿ 7, 2014

"ಧರ್ಮ"
ಅಚ್ಚಿನ ಮೊಳೆ ಖಾನೆಯಲ್ಲಿ ಸಿಕ್ಕಿ
ನಾನು ಹಿಂದೂ, ಕ್ರೈಸ್ತ, ಮುಸ್ಲೀಮನಾಗಿ
ವ್ಯಾಕರಣದ ವಿಭಕ್ತಿಗಳಷ್ಟೇ ನಿಸ್ಠೆಯಿಂದ
ಮಾರ್ಜಾಲ ಧರ್ಮಗಳನ್ನು ಪಾಲಿಸುತ್ತ

ಶೈಶವತನದಲ್ಲೇ ಮುಗ್ಧತೆ ಮುಗಿಸುವ ಧಾರ್ಮಿಕ ಪಾಠಗಳು
ಮೃದ್ವಸ್ಥಿ ಮೇಲೆ ನಕಾಶೆ ಬಿಡಿಸುವ ಕಲೆಯಂತೆ
ಧರ್ಮ ಉದ್ಘರಿಸುತ್ತಾ.. ಅಕಾರಾದಿಗಳಲ್ಲಿ
ಪ್ರಚೋದಿಸುತ್ತ, ಅರಳ ಬೇಯಿಸಿ ಕೈಯೆಣ್ಣೆ ಪಡೆ

ಕ್ರಿಸ್ತನ ಶತ್ರುವನ್ನು ಪ್ರೀತಿಸುವ ಕಲೆ ಕಲಿಯಲಿಲ್ಲ
ರಾಮನ ರಾಜ್ಯ ಪಾಲನೆ ಕಲಿಯದೆ ಭ್ರಷ್ಟರಾದಿರಿ
ಅಲ್ಲಾನ ಒಗಟ್ಟು ಕಲಿಯದೆ ಹೊಡೆದಾಡಿದಿರಿ
ಉಗ್ರ ಆಸೀಫ್​, ಕೋಮು ರಾಮ, ಪ್ರಚೋದಕ ಜೋಸೆಫ ಆದೆರೆಲ್ಲ

ಅಲ್ಲಾಹುವಿನ ರಾಸಯನಿಕ ದಹಿಸುತ್ತಿರುವ ದೇಶ ಉಳಿಸೆಂದೆ
ರಾಮನ ಮುಂದೆ ಸೀದು ಹೋದ ತ್ರಿಕರಣ ಶುದ್ಧಿಯ ಕೇಳಿದೆ
ಇಗರ್ಜಿ ಮುಂದೆ ಮುಂಬತ್ತಿ ಹಚ್ಚಿ ಕ್ರೈಸ್ತನ್ನನು ಎಳೆದಾಡಿದೆ
ಯಾವೊಬ್ಬ ದೇವನು ಉಸಿರಾಡಲಿಲ್ಲ
ಒಡೆದ ಹಡಗಿನಿಂದ ಜೀವಂತ ಉಳಿದವನಾದೆ
-ಹರವು ಸ್ಫೂರ್ತಿಗೌಡ
ಮೊದಲ ಸಲ ಅನಿಸುತ್ತಿದೆ
ನಾನು ಕಾದಿದ್ದೆ 4 ಗಂಟೆಯಾಗಲಿಕ್ಕೆ
ನೋಡದ ನನ್ನ ಅಕ್ಷರಕ್ಕೆ ಇಳಿಸಿದ್ದೆ
ಏನೋ ಸುದ್ದಿಗಳು, ಯಾರದ್ದೋ ಬಂಧನ
ಅಕ್ರಮ ಗಣಿಗಾರಿಕೆ; ಕೂಸ ಮೇಲೆ ಅತ್ಯಾಚಾರ
ಎಲ್ಲಾ ಸುದ್ದಿಗಳು ಕ್ಷಣ ಮೋದಲೇ ಹಾಕುವ ಆತುರ
ಮತ್ಯಾವ ಉಮೇದುಗಳು ಉಕ್ಕದ ಡ್ರೈ ಹಾರ್ಟ್
ಕನಿಷ್ಠ ಮೂರು ತಲೆ ಬೀಳಲೇ ಬೇಕು ಸುದ್ದಿಯ ಸಿಡಿಸಲು
ಒಂದು-ಎರೆಡು ಸಾವುಗಳುನ್ನ ಮುಲಾಜಿಲ್ಲದೆ ತಿರಸ್ಕರಿಸುತ್ತಿದ್ದೆ

ನಾನೂ ಕಾಯುತ್ತಿದ್ದೇನೆ 4ಗಂಟೆಯಾಗಲಿಕ್ಕೆ
ನನ್ನ ಬಗ್ಗೆ ಹೇಳುವ ಅಕ್ಷರಗಳ ಓದಿ ಬಿಡಲಿಕ್ಕೆ
ರಾಜಕಾರಣಿಗಳ ತಲೆಹರಟೆ ಸುದ್ದಿಗೋಷ್ಠಿಗಳ ಲೈವ್​ಗಳ ನಡುವೆ
ಭೂಕುಸಿತ; ಕರಾವಳಿಯಲ್ಲಿ ಚಂಡಮಾರುತ ಅಬ್ಬರ
ರೆಡ್ಕಾರ್ನರ್, ಲುಕ್​ಔಟ್ನೋಟಿಸಿಗಳು ಜಾರಿ
ಪೆಟ್ರೋಲ್​, ಬಿಳ್ಳಿ, ಚಿನ್ನದ ಬೆಲೆ ಏರಿಕೆ
ಉಗ್ರರ ದಾಳಿ; ಗ್ರಾಮಕ್ಕೆ ನಕ್ಸಲರ​ ಭೇಟಿ
ಹೈಕೋರ್ಟ್ತೀರ್ಪು-ಸುಪ್ರೀಂನಲ್ಲಿ ಮೇಲ್ಮನವಿ
ಸುದ್ದಿಗಳೊಂದಿಗೆ ದಿನ ಕಳೆದು ಬಿಡುತ್ತಿದ್ದ ಬಗ್ಗೆ ನಗು ನಿನಗೆ
ಉಪಮೇಯ, ರೂಪಕ, ಭಾವಬಂಧಗಳಿದ ಬಗ್ಗೆ ನಗುವೇನೋ

ನಾನೂ ಕಾಯುತ್ತಿದ್ದೇನೆ 4ಗಂಟೆಯಾಗಲಿಕ್ಕೆ
ಕತೆಗಾರನ ಕವಿತೆಗಳನ್ನು ಗಂಟುಗಳನ್ನು ಓದಲಿಕ್ಕೆ
-ಹರವು ಸ್ಫೂರ್ತಿಗೌಡ
(18-10-2013 10.40)

ಜಬೇಕು ನೀಳ ಬೆನ್ನಲ್ಲಿ
1.
ನಿನ್ನ ನೀಳ ಬೆನ್ನಲ್ಲಿ ಈಜಬೇಕು
ಮೈಚಳಿ ಬಿಟ್ಟು ಆಳಕ್ಕೆ ಕುಸಿಯುತ
ಮುತ್ತು, ಹವಳ ನಿಧಿ ಹುಡುಕುವಂತೆ
ಭೋರ್ಗರೆವ ಯವ್ವನಕ್ಕೆ ಸಿಲುಕಿ ನಲುಗಲು
2.
ನಿನ್ನ ನೀಳ ಬೆನ್ನಲ್ಲಿ ಗಾಳಹಾಕಿ ಕೂರಬೇಕು
ಹೊಸ ನೀರ ಸ್ರವಿಸು, ಹಳೆ ಮೀನು ಸಿಗಲಿ
ಒಕ್ಕಳು ಸುಳಿ ಸೆಡುವುಗಳಲ್ಲಿ ಗುದ್ದಾಡಲು
ಆಳ ಸೆಳತ ಏರಿಳಿತಗಳಿಗೆ ಸಿಕ್ಕಿ ಸೊಲೊಪ್ಪಲು
3.
ನಿನ್ನ ನೀಳ ಬೆನ್ನ ಸೌಂದರ್ಯಕ್ಕೆ ಬೊಗಸೆಯೊಡ್ಡಬೇಕು
ಪ್ರತಿ ಋತುವಿನಲ್ಲೂ ದಂಡೆಯಲ್ಲಿ ಕಾಯುತ
ಬೆಸಿಗೆ ಧಗೆಯಲ್ಲಿ ನಿನ್ನೊಡನೆ ಬೆವರಲು
ಚಳಿಯಲ್ಲಿ ಶಿಥಲೆ ತಳಕ್ಕೆ ಬಿಸಿಹರಿಸಲು
ತೂರಿ ಹರಿವವಳಿಗೆ 'ನಡು'ಬಂಡೆಯಾಗಲು
4.
ಕೊನೆಗೊಂದು ಬಾರಿ ಬಿಟ್ಟುಕೊಳ್ಳೆ
ನಿನ್ನದೇ ನೀಳ ಬೆನ್ನು ಬೇಕು
ಅಪ್ಪನ ನೆನಪಿಗೆ ಕೂಸುಮರಿ ಮಲಗಲಾದರು

-ಹರವು ಸ್ಫೂರ್ತಿಗೌಡ
ನಿನ್ನ ದೇಹದಲ್ಲಿ; ಅವನ ಆತ್ಮ ಸಿಕ್ಕಾಗ...
 
ಪೆರುವಿನ ಕಾಂಕ್ರೀಟಿನ ಸ್ಮಶಾಣವದು
ಎಲ್ಲಾ ಹೆಣದ ಮೇಲೆ ಉಸಿರು ಬಿಗಿಸಿದ ಗೋರಿಗಳು
ಎದೆ ಮೇಲೆ ಕಲ್ಲೆಳೆದುಕೊಂಡು ಮಲಗಿಬಿಟ್ಟಿವೆ
ತಲೆಬುರುಡೆಗೆ ಕ್ರೈಸ್ತನ ಕಡ್ಡಿ ಸಿಕ್ಕಿಸಿಕೊಂಡು
ಒಣಗೆಲೆ ಕೆರೆದು ಉಗುರು ಸವೆದುಬಿಟ್ಟವು
ಜನನ-ಮರಣ ಇಸುವಿಗಳು; ನಡುವೆ ಬದುಕಿಬಿಟ್ಟಿದ್ದಕ್ಕೆ
ಒಂದೆರೆಡು ದೆವ್ವಗಳು ಸಿಗಬೇಕಿದ್ದವು ಕಷ್ಟಸುಖಕ್ಕೆ
ಹಿಂದಿರುಗಲು ನೆನಪಾದಂತೆ ಮರೆತುಬಿಟ್ಟೆ
ನಿನ್ನ ಹುತ್ತಿಟ್ಟ 3-6ಅಡಿ ಹುಡುಕಲು

ಪೆರುವಿನ ಕಾಂಕ್ರೀಟಿನ ಸ್ಮಶಾಣದಲ್ಲಿದೀಯೇ??
ನನ್ನಣೆಯ ಸಿಂಧೂರ ಪ್ರಶ್ನಿಸುವುದರೊಳಗೆ
ನಿನ್ನೆಣದ ಮಂದೆ ಕಿತ್ತೆಸೆಯಬಹುದಿತ್ತು
ಹೂ, ಬಳೆ, ತಾಳಿ, ಕಾಲುಂಗುರ

ಪೆರುವಿನ ಕಾಂಕ್ರೀಟಿನ ಸ್ಮಶಾಣವದು
ತಲೆ ಚೆಚ್ಚಿಕೊಂಡು ಹುಡುಕುತ್ತಿದ್ದೆ ನಿನ್ನದೊಂದು ಹೆಣವ
ನಿನ್ನ ಕಾಣಲು ಬಂದು ಸಾವಿರಾರು ಕ್ರೈಸ್ತನ ಕಂಡೆ
ಗೂಟ ಹೊಡೆಸಿಕೊಂಡಿದ್ದ ಅಂಗೈ ಮೊಳೆಯ ತುಕ್ಕು
ಬುರುಡೆಗೆ ಸಿಕ್ಕಿಕೊಂಡ ಮುಳ್ಳಿನ ಕಿರೀಟದ ಮೊನಚು
ದೇಹ ಜಗ್ಗಿಸಿ ಬೆನ್ನಿಗೆ ನೇತು ಹಾಕಿಕೊಂಡಿದ್ದ ಶಿಲುಬೆ
ದೇವಪುತ್ರನಿಗೂ ಬೆತ್ತಲೆಯ ಅಂಜಿಕೆಯಾಗುವುದರೊಳಗಿನ ಲಂಗೋಟಿ
ತಲೆ ಎತ್ತದೆ ನೇತಾಡುತ್ತಿದ್ದ; ಸ್ಮಶಾಣವಾಗಲಿ ಆಲಯವಾಗಲಿ
ಪಿತನ ಸುತನ ಮತ್ತು ಪವಿತ್ರಾತ್ಮ ಆತ್ಮದಲ್ಲಿ-ಆಮೆನ್
-ಹರವು ಸ್ಫೂರ್ತಿಗೌಡ