ಬುಧವಾರ, ಮೇ 15, 2013

ಗುಂಗು

ನೀ ತಬ್ಬಿದಷ್ಟು ಗಟ್ಟಿಯಾಗಿ
ಉಸಿರುಕಟ್ಟಿ ಮೈಬಳಸುವೆ
ತುಟಿ ಹೀರಿದಷ್ಟೂ
ಮಧು ಬಟ್ಟಲು
ಕಚ್ಚಿದಷ್ಟೂ ತಿನ್ನಲಾರದ ರಸಹಣ್ಣು
ನಿದ್ದೆ ಹತ್ತಿದರು
ಮಗ್ಗಲು ಬದಲಾಯಿಸಿ ಹೊರಳಾಡಿ
ತೀರದ ತೃಪ್ತಿ ನಡುವಿಗೆ
ಕತ್ತಲೆಯೇ ನೆಮ್ಮದಿ
ಕೆಂಪು ನೆಲದ ಕನಸುಗಳಂತೆ
ಗಿಜುಗ ಗೂಡಿನ ಗುಂಗಿನಂತೆ

    -
ಹರವು ಸ್ಫೂರ್ತಿಗೌಡ

ಮಂಗಳವಾರ, ಮೇ 14, 2013

ರಾಧೆಯೆಲ್ಲಿ?

ಲೀಲೆಯಲ್ಲಿ ಮೈಮರೆಸಿ
ವಿಶ್ವರೂಪವ ತೋರಿದ ಗೋಕುಲ
ರಾಧೆಯ ಕಥೆ..?

ಇಂದಿಗೂ ನಿಗೂಢ ಇತಿಹಾಸ
ಯಮುನಾ ತೀರದಲ್ಲೇ
ಉಳಿದು ಹೋದಳೇ ರಾಧೆ..!


-ಹರವು ಸ್ಫೂರ್ತಿಗೌಡ
27-04-2013
ಕಳೆದು ಹೋದ ಕೊನೆಯ ಸಾಲು..

ಪಿತೃ ಮೂಲದ ಬೇರು ನಾನು
ಸ್ವತಂತ್ರವಾಗಿ ಅರಳಿದರೂ
ಮನೆಯಂಗಳದಲ್ಲೇ
ಉದುರಿ ಬಿಳುವ ಹೂ
ಜೀವನ ಪ್ರೀತಿ ಇಲ್ಲ
ಯಾಂತ್ರಿಕ ಮನಸ್ಸು
ಅಪರೂಪಕ್ಕೊಮ್ಮ
ಅವತರಿಸುವ ನಗೂವು ನಿನ್ನದೇ..!
ನಾನೆಲ್ಲೋ ನಡೆದೆ 161ವರೆ ದಿನವೂ..
ಕಪ್ಪು ಹುಡುಗಿಯ ಬಳಿ
ಬಣ್ಣ ಕೇಳಬೇಡ
ಎಲ್ಲದಕ್ಕೂ ಕಾರಣಬೇಕು
ಕಳೆದುಕೊಂಡ ಕೊನೆಯ ಸಾಲಿಗೂ..  


-ಹರವು ಸ್ಫೂರ್ತಿಗೌಡ  
 26-04-2013