ಶುಕ್ರವಾರ, ಜೂನ್ 7, 2013

ಕೆಂಪು ಗೀತೆ

ಯಾವ ಗುರುತೋ, ಯಾರ ಮತವೂ
ಗೆದ್ದ ಮೇಲೆ ನಾವು ಯಾರು
?

ಮತವ ಪಡೆದು ಬದುಕ ಕಳೆದು
ಪ್ರಶ್ನೆಸಿ ನಿಲ್ಲುವರು ನೀವು ಯಾರು?

ಕಾಡ ಕಣಿವೆಯಲಿ ಗುಡಿಸಲ ಕಟ್ಟಿ
ಉತ್ತಿ-ಬಿತ್ತಿ ಬದುಕ ಕಂಡ ಜೀವ ನಾವು

ಹುಲಿಯೇ ಇಲ್ಲದ ಸಂರಕ್ಷಿತ ಅರಣ್ಯವೆಂದು
ಕಿತ್ತು ಒದರಿದಿರೀ ಪುಟ್ಟ ಗುಡಿಸಲ ನೀವು
ಕಟ್ಟಿದ ಬದುಕ ಕೆಡವಿ ಹೋದವರೆ
ಕರಾವಳಿಯ ಕಾಣದ ಕಾನನ ಕಂಡಿರೇ ನೀವು
ಕೆಂಪು ಬಣ್ಣವ ಮುಖಕ್ಕೆ ಬಳಿದು
ಬಣ್ಣವಿಲ್ಲ ಕತ್ತಲಲಿ ಕೂರಿಸಿ ಕೇಳುವಿರಿ
ಕೆಂಪು ಹುಡುಗ ನೀನು ಯಾರು

ಕೆಂಪು ಹುಡುಗ ನಾನು ಯಾರು?
ಎಂದ ಮೇಲೆ ಹಿಡಿದೆ ಕೆಂಪು ಬಾವುಟ
ಗೇರು ಬೀಜದ ಸೊನೆಯ ಕೋಪ

ಗುಳೆಗುಳೆ ಹೊಟ ನನ್ನವರ ಬದುಕು ಇನ್ನೆಲ್ಲಿ
ತಿನ್ನುವ ಅನ್ನ ಮಣ್ಣಿಗೆ ಸುರಿದಿರಿ
ಸಿಡಿದು ಹಿಡಿಯ ಬಾರದೆ ಬಂದೂಕು?
ಕನಸ ಬೆರಸಿ ನೆಟ್ಟ ಅಡಿಕೆಗೆ
ಬೆಂಕಿಯಿಟ್ಟು ಕೇಕೆ ಹಾಕುವ ಪಡೆಯೇ
ಹಾಡಬಾರದೇ ಕ್ರಾಂತಿ ಗೀತೆಯ ನಾನು
ನಾನು ಮಲೆ ಕುಡಿಯ.. ನಾನು ಮಲೆಕುಡಿಯ..
ಹುಲಿಯು ನನ್ನದೇ ಮಲೆಯು ನನ್ನದೆ
ಸಂರಕ್ಷಿತ ಅರಣ್ಯವೂ ನನ್ನದೇ
ಬಿಟ್ಟು ತೊಲಗಿರಿ ನೀವು..


-ಹರವು ಸ್ಫೂರ್ತಿಗೌಡ
13-05-2013(5.57pm)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ