ಶುಕ್ರವಾರ, ಜೂನ್ 7, 2013

ನಿನಗರಿಯದೇ ಮಾಡುವ
ಮುದ್ದಿನ ಕೆಲಸವೆಲ್ಲ ಪಾತಕವೇ
ನಗರಿಯದೇ ಕೆನ್ನೆಗೆ ಭಾರಿಸಿದ್ದೇಲ್ಲಾ ಪ್ರೀತಿಯೇ
ಭೇಟಿ-ನಿದ್ದೆ ಎರಡೂ ಆಕಸ್ಮಿಕ
ಸೊಂಟ ಬಳಸಿದ ನೀನು
ಭುಜಕೊರಗಿದ ನಾನು
ಎರಡೂ ಅಪಘಾತ
ಒಳಗೂ-ಹೊರಗೂ
ಯಾವುದಕ್ಕೂ ಅರ್ಥವಿಲ್ಲ
ಸುಮ್ಮನಿರುವುದು ವಾಸಿ
ಬರೆದ ಮೇಲೂ
ಓದಿದ ಮೇಲೂ..

-ಹರವು ಸ್ಫೂರ್ತಿಗೌಡ
28-04-2013(9.38 pm)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ