ಶುಕ್ರವಾರ, ಜೂನ್ 7, 2013

ಎಲ್ಲೋದಳು?

ಕಬ್ಬು ಬೆಳೆದ ನೀರು ಗದ್ದೆಯಲ್ಲಿ
ಮೊಳೆಯಲಿಲ್ಲ ರಾಗಿ
ತುಂಬಿ ಹಾಲು ಕಟ್ಟುತ್ತಿದ್ದ ಭತ್ತ
ಬಣಗುಟ್ಟಿ ಜಲ್ಲನೆ ಉದುರಿ
ನಾಡ ಹಸು, ಹಿಂಡು ಹಿಂಡು ಕುರಿಗಳ

ಸಂತೆ ಬಿಕರಿಗೆ ಬಿಟ್ಟು
ಬಿತ್ತನೆ, ನಾಟಿ ಯಾವ ಕೂಲಿಯು ಸಿಗದೆ
ತುಂಡು ಬೀಡಿಗೆ ಬೆಂಕಿಯಿಟ್ಟರೆ..
ಕಿಟ್ಟದ ಕಿಡಿ ಯಾವುದೋ ರೋಷಕ್ಕೆ ಬೆಂಕಿಯಿಟ್ಟು
ಯಾರ ಸುಡಲಿಕ್ಕೆ ಕಾಯುವುದೋ
ಹರಳಲ್ಲಿಲ ಬೇಲಿ ಹೂ
ಮಾಗಲಿಲ್ಲ ಮರದ ಹಣ್ಣ
ಸರಿಯಲಿಲ್ಲ ಮೊದಲ ಮಳೆ
ಬರದ ಕಣ್ಣು ಬರಿದು
ಕಾವೇರಿ ನಿನ್ನೆಲ್ಲೇ?


-ಹರವು ಸ್ಫೂರ್ತಿಗೌಡ
13-05-2013(5.30pm)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ