ಶುಕ್ರವಾರ, ಏಪ್ರಿಲ್ 19, 2013

"ಅಪೂರ್ಣರಘುನಂದನ"

ಚಿಂತೆ ಸಂಪಿಗೆ ಮುಡಿದಳು
ರಾಮ ನಾಮದ ಘಾಟು ಗಮಲು ಒಡಲಲ್ಲಿ

ಗೆದ್ದವನಿಗೆ ಉಡುಗೊರೆಯಾದಳು

ಗೆಲುವುದೊಂದೇ ಗೊತ್ತು ಅವಕ್ಕೆ

ವಿರಹ ತಣಿಸದ
ಮೋಹದ ಗಂಡನಾಗಿ ಉಳಿದ

ಯಾವುದೋ ಯುಗದಲ್ಲಿ
ಯಾರದೋ ಅಶೋಕವನದಲ್ಲಿ
ಯಾರಿಗಾಗಿ ಶೋಕಿಸಿದಳು ಸೀತೆ..


-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ