ಮಂಗಳವಾರ, ಏಪ್ರಿಲ್ 23, 2013


ನಿತ್ರಾಣ ದೇಹಕ್ಕೆ
ಪ್ರಾಣ ಉಸಿರಾಗುವೆ

ಉರಿಗಣ್ಣಿಗೆ
ಹೊಸ ಕನಸ ಕಟ್ಟುವೆ

ಹಸಿವು ದಾಹಕ್ಕೆ
ಪ್ರೀತಿ ತುಟಿಯ ತುಂಬುವೆ

ಬರುಡು ಬಿಸಿಲ ಬಾಳಲ್ಲಿ
ತೋಳು ನೆರಳಿಂದ ಮುದ್ದಿಸುವೆ

ಭೈರಾಗಿ ಅಲೆಯದಿರು
ತಲೆಗೂದಲಾಸಿ ಮಲಗಿಸುವೆ

ಬಯಸುವ ಬಣ್ಣದ ಸೀರೆ
ಮೆಚ್ಚುವ ಲೋಕ ಸೃಷ್ಠಿಸಿ

ಇಷ್ಟ ಮಲ್ಲಿಗೆ ಅಮಲು
ಮೆಚ್ಚಿದ ಮಡದಿ ಮಡಿಲು

ಮರೆಯದಿರು..
ನಿನ್ನೊಂದು ನಗುವಿಗಾಗಿ
ಅಮೃತಧಾರೆಯೇ ನನಾಗುವೇ

-ಹರುವು ಸ್ಫೂರ್ತಿಗೌಡ
  23-04-2013

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ