ಶುಕ್ರವಾರ, ಏಪ್ರಿಲ್ 19, 2013

ಬೇಕು-ಬೇಡಗಳ ನಡುವೆ.. ಕೆಲವು 'ಯಾಕೆ'ಗಳು

ದೇವರನ್ನ ನಂಬಲಿಲ್ಲ
ಪ್ರೀತಿಯಲ್ಲಿ ಶಂಕೆ ಇಲ್ಲ ಯಾಕೆ?

ಮುಖ ಕಂಡರೇ ಆಗಲ್ಲ
ಮುಂದೆ ಹೋದರೆ ತಿರುಗಿ
ಹಿಂದೆ ನೋಡೋದು ಯಾಕೆ?

ಮಾತು ಬಿಟ್ಟರು
ಮೌನದಲ್ಲಿ ಒಂಟಿ ಯಾಕೆ?

ಕೊಟ್ಟ ಮುತ್ತು
ಬರೀ ಶಬ್ಧವಾಗೋದು ಯಾಕೆ?

ಅಪ್ಪಿದ ತೋಳುಗಳು ಬಂಧನವಾಗದೆ
ಬಂಧಿಆಗೋದು ಯಾಕೆ?

ಕಳದೇ ಹೋದರು
ಗುರುತು ಸಿಗುತಿದೆ ಯಾಕೆ?

ಸತ್ತಾತ್ಮದೊಡನೆ
ಸಹವಾಸ ಯಾಕೆ?

-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ