ಶುಕ್ರವಾರ, ಸೆಪ್ಟೆಂಬರ್ 13, 2013

ಉದ್ದೇಶವಾಗಿತ್ತು...

ಗಾಂಧಿಯಿಂದ ಗೋಡ್ಸೆವರೆಗೆ ಎಲ್ಲರೂ ಸತ್ತರು
ರಘುಪತಿ ರಾಘವರಾಜಾರಾಮ್.. ಕಂಠಗಳು ಸ್ತಬ್ಧವಾದವು
'ಅಖಂಡ ಭಾರತ' ನಿರ್ಮಿಸುವ 'ಜೈಶ್ರೀರಾಮ್'ಗಳು ಮೋಳಗಿದವು
ಪಾಕ್ನಲ್ಲಿ ಸಿಖ್ಖ್ರು ಅನುಭವಿಸಿದ ಗುಲಾಮಗಿರಿಗಾಗಿ
ಭಾರತದಲ್ಲಿ ರಾಮಂದಿರು ಯಜಮಾಗಿರಿ ನಡೆಸಿದರು
ಅಹಿಂಸೆ ಹೋರಾಟಗಳು ವ್ಯರ್ಥವಲ್ಲವೆಂದಿದ್ದು
ಅಹಿಂಸೆಗಳೆಲ್ಲಾ ವಿಕೃತ ಹಿಂಸೆಗಳಾಗಿ
ಪ್ರಜಾಪ್ರಭುತ್ವವನ್ನು ಭೋಗಿಸುತ್ತಾ...
ನನ್ನಕ್ಕನನ್ನು ಹರಿದು ಚಿಂದಿಯಾಗಿಸಿ ತಿಂದಾಗ
ಅಹಿಂಸೆ ಸ್ವತಂತ್ರಯುಗದ ದಂತಕಥೆ ಆಯ್ತ

ಯಾರು ಸತ್ತರೆ ದೇಶಕ್ಕೆ ಏನು?
ನಮ್ಮ ಮನೆ ಮಕ್ಕಳು ಉಂಡು ಮಲಗಿದರು
ಸಾಯಬೇಕಾದವರು ಸತ್ತರು, ಆತ್ಮಗಳಾಗಿ ಹಾರಿದರು
ಶ್ರಮಿಕನ ಶ್ರಮದಲ್ಲೇ ಅಧಿಕಾರ ಗಿಟ್ಟಿಸಿಕೊಳ್ಳುವವನು
ಜಾತಿ ಪಟ್ಟಿ ಅಂಟಿಸಿ, ಒಡೆದು ಆಳುವವನು
ಹಸಿದ ಹೊಟ್ಟೆಗಳಿಗೆ ಸಾರಾಯಿ ಹಂಚುವವನು
ಚಿತೆಯಲ್ಲಿ ರಾಜಕೀಯ ಅನ್ನ ಬೇಯಿಸುವವನು..
ಉತ್ತುವ ಭೂಮಿ ನುಂಗುವವನು
ಉಳಿದುಕೊಂಡರು..
ಉದೇಶವಿತ್ತಾ ‘ಮಹಾನ್’ ಸಾವಿಗೆ?

-ಹರವು ಸ್ಫೂರ್ತಿಗೌಡ
18-08-2013(5.30)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ