ಶುಕ್ರವಾರ, ಸೆಪ್ಟೆಂಬರ್ 13, 2013

ವಾಸ್ತವ ಇನ್ನೂ ತೆರೆದುಕೊಳ್ಳುತ್ತಲೇ ಇದೆ
ನಿನ್ನೊಲುಮೆ ಅರ್ಥವಾದಷ್ಟು
ವಸ್ತುಗಳಿಗೆ ಎರಡು ಮುಖ ಕಾಣಿಸುತ್ತಿದೆ
ನೀತಿಯಿಂದ ಹೊರತಾದದ್ದು
ಮನುಷ್ಯನ ಆಳದ ಸಾಕ್ಷಿಗಳು
ಪ್ರಶ್ನೆಗಳು ಹೇಗೆ ಏಳುತ್ತವೆ!
ನನ್ನದು ಜೀವಿಸುವ ಅಮಲು
ಸತ್ತವನೇ ಕಡೆಮೆ ಅಪಾಯಕಾರಿ
ಗುಟ್ಟುಗಳನ್ನೆಲ್ಲ ಸ್ವೀಕರಿಸಿ ಸತ್ತುಹೋಗಿದ್ದ
ಹೊರಗಿನ ಪ್ರತಿ ಸಾವು ನನ್ನೊಳಗೂ...
ಮೌನ ಸ್ಥಿರಪ್ರಜ್ಞೆ ಗದ್ದಲದಿಂದ ತುಂಬಿ ಹೋಗುವ ಭಯ
ಅಸಹ್ಯ “ಜಿದ್ದು”; “ಪ್ರೀತಿಸು” ಎಲ್ಲ ತಾತ್ಕಾಲಿಕ
ಕಾಕತಾಳೀಯ ಮತ್ತು ನಿಗೂಢ
ಇಷ್ಟವೆಲ್ಲಾ ಅನುಷ್ಠಾನವಾಗುತ್ತಿತ್ತು
ಅಗಲಿಕೆ ಅರ್ಥವಾಗಲಿಲ್ಲ, ಪ್ರಯತ್ನಿಸಲೂ ಇಲ್ಲ
ಪ್ರೀತಿಯ ತಂಪೆರೆಯುತ್ತಿದ್ದ ಮಳೆಗೂ ಸಿಟ್ಟು
ಗುಡುಗಿ, ಕೆಂಡದಂತೆ ಶಬ್ದ ಆರ್ಭಟ
ಮಳೆ ಹನಿಯಲಿಲ್ಲ ಭೂಮಿ ಬಿಕ್ಕಳಿಸುತ್ತಿದ್ದಳು...
ಒಂದು ದಿನ ಪೂರ್ಣ ನೀಲಿ ಆಕಾಶ
ಕಚ್ಚಿದ ಬಾನಿನ ತುಣುಕು ಕೈಯಲಿ..

-ಹರವು ಸ್ಪೂರ್ತಿಗೌಡ
07-06-2013(11.35 pm)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ