ಮೈಮರೆವ ಪ್ರೀತಿ ತನ್ನನೇ ಮರೆಸಿತು ಶಕುಂತಳ
ಬೆರಳಿಗಿಟ್ಟ ಉಂಗುರ ಕಳೆದುಕೊಂಡರೆ ಮರೆತುಬಿಡುವುದೇ
ವಂಶೋಧರದ ಸಂಸ್ಕಾರಕ್ಕೆ ನಿಯೋಗದ ಪಾಂಡವರು
ಕುಂತಿಯ ಪಾವಿತ್ರ್ಯತೆ ಪ್ರಶ್ನಿಸಿದನ ಕೈಲಾಗದ ಪಾಂಡು
ಕಣ್ಣಿಗೆ ಬಿದ್ದ ಕಾಮ ಕಂಡು ಕಾಲ್ಲಾದಳೇ ಅಹಲ್ಯೆ
ಪುರುಷೋತ್ತಮನ ಕಾಲ್ಧೂಳು ಬೇಕಾಯಿತೇ ಕಲ್ಲಿಂದರಳಲು
ಎಂಜಲು ಹಣ್ಣು ನೈವೇದ್ಯ ಕೊಟ್ಟ ಭಕ್ತಿ ಕಂಡನೇ
ಕಾಣಲಿಲ್ಲ ರಾಮಗೆ ಕಾಯಿಸಿ ಹಣ್ಣಾಗಿಸಿದ ಶಬರಿಯ
ಆಯ್ಯೋ ಜಾನಕಿ ಕಥೆ ಕೇಳಬೇಡಿರಮ್ಮ ಭೂಗತವಾದಳು
ಏಕಪತ್ನಿವತ್ರಸ್ಥನಾಗಲು ಶಂಕಿಸಿ, ಸುಡಿಸಿ, ಮಣ್ಣುಮಾಡಿದ
ಇಂದಿಗೆ ಶಕುಂತಲ, ಕುಂತಿ, ಅಹಲ್ಯೆ, ಶಬರಿ, ಸೀತೆ ಬುದ್ಧಿವಂತೆಯರಾದರೇ?
ಹೆಣ್ಣ ಮಾಯೆಗೆ, ಅವಳ ವಾಂಛೆಗೆ ಬಲಿಯದೆ ಬದಲಾಗದವನಾದನೆ?
ಬೆರಳಿಗಿಟ್ಟ ಉಂಗುರ ಕಳೆದುಕೊಂಡರೆ ಮರೆತುಬಿಡುವುದೇ
ವಂಶೋಧರದ ಸಂಸ್ಕಾರಕ್ಕೆ ನಿಯೋಗದ ಪಾಂಡವರು
ಕುಂತಿಯ ಪಾವಿತ್ರ್ಯತೆ ಪ್ರಶ್ನಿಸಿದನ ಕೈಲಾಗದ ಪಾಂಡು
ಕಣ್ಣಿಗೆ ಬಿದ್ದ ಕಾಮ ಕಂಡು ಕಾಲ್ಲಾದಳೇ ಅಹಲ್ಯೆ
ಪುರುಷೋತ್ತಮನ ಕಾಲ್ಧೂಳು ಬೇಕಾಯಿತೇ ಕಲ್ಲಿಂದರಳಲು
ಎಂಜಲು ಹಣ್ಣು ನೈವೇದ್ಯ ಕೊಟ್ಟ ಭಕ್ತಿ ಕಂಡನೇ
ಕಾಣಲಿಲ್ಲ ರಾಮಗೆ ಕಾಯಿಸಿ ಹಣ್ಣಾಗಿಸಿದ ಶಬರಿಯ
ಆಯ್ಯೋ ಜಾನಕಿ ಕಥೆ ಕೇಳಬೇಡಿರಮ್ಮ ಭೂಗತವಾದಳು
ಏಕಪತ್ನಿವತ್ರಸ್ಥನಾಗಲು ಶಂಕಿಸಿ, ಸುಡಿಸಿ, ಮಣ್ಣುಮಾಡಿದ
ಇಂದಿಗೆ ಶಕುಂತಲ, ಕುಂತಿ, ಅಹಲ್ಯೆ, ಶಬರಿ, ಸೀತೆ ಬುದ್ಧಿವಂತೆಯರಾದರೇ?
ಹೆಣ್ಣ ಮಾಯೆಗೆ, ಅವಳ ವಾಂಛೆಗೆ ಬಲಿಯದೆ ಬದಲಾಗದವನಾದನೆ?
-ಹರವು ಸ್ಫೂರ್ತಿಗೌಡ
30-09-2013 (1.11pm)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ