ಶುಕ್ರವಾರ, ಅಕ್ಟೋಬರ್ 4, 2013

ಮೈಮರೆವ ಪ್ರೀತಿ ತನ್ನನೇ ಮರೆಸಿತು ಶಕುಂತಳ
ಬೆರಳಿಗಿಟ್ಟ ಉಂಗುರ ಕಳೆದುಕೊಂಡರೆ ಮರೆತುಬಿಡುವುದೇ

ವಂಶೋಧರದ ಸಂಸ್ಕಾರಕ್ಕೆ ನಿಯೋಗದ ಪಾಂಡವರು
ಕುಂತಿಯ ಪಾವಿತ್ರ್ಯತೆ ಪ್ರಶ್ನಿಸಿದನ ಕೈಲಾಗದ ಪಾಂಡು

ಕಣ್ಣಿಗೆ ಬಿದ್ದ ಕಾಮ ಕಂಡು ಕಾಲ್ಲಾದಳೇ ಅಹಲ್ಯೆ
ಪುರುಷೋತ್ತಮನ ಕಾಲ್ಧೂಳು ಬೇಕಾಯಿತೇ ಕಲ್ಲಿಂದರಳಲು

ಎಂಜಲು ಹಣ್ಣು ನೈವೇದ್ಯ ಕೊಟ್ಟ ಭಕ್ತಿ ಕಂಡನೇ
ಕಾಣಲಿಲ್ಲ ರಾಮಗೆ ಕಾಯಿಸಿ ಹಣ್ಣಾಗಿಸಿದ ಶಬರಿಯ

ಆಯ್ಯೋ ಜಾನಕಿ ಕಥೆ ಕೇಳಬೇಡಿರಮ್ಮ ಭೂಗತವಾದಳು
ಏಕಪತ್ನಿವತ್ರಸ್ಥನಾಗಲು ಶಂಕಿಸಿ, ಸುಡಿಸಿ, ಮಣ್ಣುಮಾಡಿದ

ಇಂದಿಗೆ ಶಕುಂತಲ, ಕುಂತಿ, ಅಹಲ್ಯೆ, ಶಬರಿ, ಸೀತೆ ಬುದ್ಧಿವಂತೆಯರಾದರೇ?
ಹೆಣ್ಣ ಮಾಯೆಗೆ, ಅವಳ ವಾಂಛೆಗೆ ಬಲಿಯದೆ ಬದಲಾಗದವನಾದನೆ?

-ಹರವು ಸ್ಫೂರ್ತಿಗೌಡ
30-09-2013 (1.11pm)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ