ಭಾನುವಾರ, ಮಾರ್ಚ್ 24, 2013

ಕಾವಿಗೆ ಬೇಕು ಸರ್ವಥಾ

ವಿರಹ ಬೆಂಕಿ ಹತ್ತಿ
ಉರಿದು ಪ್ರೀತಿಧಾರೆ
ಅರಿಯುವ ವೇಳೆಗೆ
ಪ್ರಣಯದ ಉರಿ ನಿಲ್ಲಿಸಿದೆ
ಕಾದು ಕುದಿದು ಮರಳಿದ
ವಿರಹ ತಣ್ಣಗಾಗದು
ಸುಟ್ಟಿತು
ಹೃದಯ ಬಾಣಲೆ!
ಬೂದಿಯಾಗಿ ಹಾರಿ
ಗಾಳಿಯಲ್ಲಿ ಲೀನವಾಗದೆ
ಮೈಕಾವೇರಿಸುತ್ತಿದೆ
ಕಾಡಿಸುತ್ತಿದೆ
ನಿಲ್ಲದ ಜ್ವರದಂತೆ

-ಹರವು ಸ್ಫೂರ್ತಿಗೌಡ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ